ಬೆಂಗಳೂರು ಗ್ರಾಮಾಂತರ

ವಿಶ್ಬಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸನ್ಮಾನ ಸಮಿತಿಯಿಂದ ಸನ್ಮಾನ ಕಾರ್ಯಕ್ರಮ

Published

on

ದೊಡ್ಡಬಳ್ಳಾಪುರ: ಸನ್ಮಾನ ಸಮಾರಂಭ ವನ್ನು ಕೃತಜ್ಞತಾ ಕಾರ್ಯಕ್ರಮ ಎನ್ನಬಹುದು ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಮಂಜನಾಥಸ್ವಾಮಿ ಹೇಳಿದರು. ಅವರು ನಗರದ ಕೆಎಂಹೆಚ್.ಕಲ್ಯಾಣ ಮಂಟಪ ದಲ್ಲಿ ನಡೆದ ವಿಶ್ಬಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸನ್ಮಾನ ಸಮಿತಿಯಿಂದ ನಡೆದ ಸನ್ಮಾನ ಕಾರ್ಯಕ್ರಮ ದಲ್ಲಿ ಮಾತನಾಡಿದರು.

1990 ರಿಂದ ಅವರನ್ನು ನೋಡಿದಾಗ ಹೋರಾಟ ಮಾಡಿ ಸಂಘಟನೆ ಕಟ್ಟಿದ್ದಾರೆ. ವೈಚಾರಿಕ ವಾಗಿ ಒಂದು ಸಮಾಜವನ್ನು ಕಟ್ಟುವುದು ಅಷ್ಟು ಸುಲಭವಲ್ಲ ವಿರೋಧ ಮಾಡಿದ ಜಾಲಪ್ಪ ನವರ ಮಕ್ಕಳನ್ನು ಸಂಘಟನೆ ಸೇರಿಸಿದ್ದು ಅವರ ಸಂಘಟನೆಯ ಶಕ್ತಿ ತೋರಿಸುತ್ತದೆ.

ಕಷ್ಟದ ದಿನಗಳಲ್ಲಿ ಸಂಘಟನೆಯ ಕಟ್ಟಿದ್ದು. ಒಬ್ಬ ವ್ಯಕ್ತಿ ವ್ಯಕ್ತಿತ್ವ ವಿಚಾರ ಬದ್ದನಾಗಿದ್ದರೆ ಮಾತ್ರ ಅವರನ್ನು ಜನ ಗುರುತಿಸಿಲು ಸಾದ್ಯ. 25 ಸಾವಿರ ಜನರಿ ಕಣ್ಣಿನ ಚಿಕಿತ್ಸೆ ಮಾಡಿಸಿದ್ದಾರೆ.ಸಂಪಾದಿಸಿದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಬೇಕು. ನಮಗೆ ಕಷ್ಟ ವಾದರೂ ಪರವಾಗಿಲ್ಲ ಬೆರೆಯವರಿಗೆ ಒಳ್ಳೆಯದಾಗಲಿ ಎಂಬ ಮನಸಿನಿಂದ ದಾನ ಮಾಡುವುದು ನಿಜವಾದ ದರ್ಮ. ಇಂದು ಮಾಡುತ್ತಿರುವ ಸಹಾಯಧನ‌ ಸಾಂಕೇತಿಕ ಅದು ಇತರರಿಗೆ ಪ್ರೇರಣೆ ಕೊಡಲಿ ಅವರ ಮಾಡಿರುವ ಸಾಮಾಜಿಕ ಕಾರ್ಯ ಶಾಶ್ವತ ವಾಗಿ ಉಳಿಯಲಿ ಎಂದರು.

ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ನಿರ್ದೇಶಕ ಹುಲಿಕಲ್ ನಟರಾಜ್ ಮಾತನಾಡಿ

ದೊಡ್ಡಬಳ್ಳಾಪುರಕ್ಕೆ ಯಾರಾದರೂ ಬಂದಾಗ ಮೊದಲ ಹನುಮಂತರಾಯ್ಪ ಮನೆಗೆ‌ ಭೇಟಿ ನೀಡುತ್ತಿದ್ದರು.
ಯಾವುದೇ ರಾಜ್ಯ ಮಟ್ಟದ ಕಾರ್ಯಕ್ರಮ ದಲ್ಲಿ ಇವರು ಇರುತ್ತಾರೆ ಹಿದ್ದಲಗಿಡ ಮದ್ದಲ್ಲ ಎಂಬಂತೆ ಅವರು ಮಾಡಿರುವ ಸೇವಾ ಕಾರ್ಯಗಳು ಸಾಕಷ್ಟಿದೆ. ಅವರು ಬಂದ ಸಂಬಳವನ್ನು ಪೌರ ಕಾರ್ಮಿಕ ಹಂಚಿದ್ದಾರೆ.
.
ತೊಂದರೆ ಯಲ್ಲಿರುವ ನಮ್ಮ ಕಾರ್ಯಕರ್ತರಿಗೆ ಧನಸಹಾಯ ಮಾಡವುದು ಅವರಿಗೆ ಆರ್ಥಿಕ ಭದ್ರತೆ ಇರಬೇಕು. ಅವರು ಆರಂಭ ಚಿಂತನೆಗಳು ನೋಡಿದಾಗ ದೊಡ್ಡ ಬಳ್ಳಾಪುರ ಬಸ್ ನಿಲ್ದಾಣ ಸುತ್ತಮುತ್ತಲಿನ ಜಾಗದಲ್ಲಿ ವ್ಯಾಪಾರದ ಮಳಿಗೆಗೆ ಮಾಡಿ ಒಂದು ತಿಂಗಳಿಗೆ 50 ಲಕ್ಷ ಆದಾಯ ಮಾಡಿದರು.ಲಯನ್ಸ ಕ್ಲಬ್ ಅದ್ಯಕ್ಷರಾದ ನಂತರ ಹಳೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಡಯಾಲಿಸಿಸ್ ಚಿಕಿತ್ಸೆ ಕೇಂದ್ರ ಆರಂಬಿಸಿದ್ದು ಅವರ ಸಾದನೆ‌ ಎಂದರು.

ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅದ್ಯಕ್ಷ ಕೆ ಎಂ ಹನುಮಂತರಾಯಪ್ಪ ಮಾತನಾಡಿ ಈ ದೇಶ ಕಂಡಂತಹ ಅಪ್ರತಿಮ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾರ್ಗದರ್ಶನ ಅವರ ಸೇವೆ ಅಪಾರ ವಾಗಿದೆ. ಆ ನಿಟ್ಟಿನಲ್ಲಿ. ನನಗೆ ಬಂದ ಎಲ್ಲ ಸಂಬಳವನ್ನು ಸ್ವಯಂ ಸೇವಕ ರಿಗೆ ನೀಡಿದೆ. ಅನಂತಕುಮಾರ್, ಸದಾನಂದ ‌ಗೌಡರ ಸಹಕಾರ ಸಾಕಷ್ಟಿದೆ.ದೇಶವನ್ನು ಸುತ್ತಿ ರೇಷ್ಮೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 3000 ಕೋಟಿ ಅನುದಾನ ಹೆಚ್ಚಿಸಲು ಶ್ರಮ ವಹಿಸಿದೆ.

ವಾಜಪೇಯಿ ಅವರಿಗೆ ಸನ್ಮಾನ ಮಾಡಿದ್ದೇನೆ. ಅಡ್ವಾಣಿ ಆತ್ಮೀಯತೆ ನನಗೆ ಆದರ್ಶವಾಗಿದೆ. ಎಲ್ಲರೂ ಚೆನ್ನಾಗಿ ಸಂಪಾದನೆ ಮಾಡಿ ಚೆನ್ನಾಗಿ ದಾನ ದರ್ಮ ಮಾಡುವುದನ್ನು ಕಲಿಯಬೇಕು ಎಂದರು. ಇಂದು ಸಮಿತಿಯಿಂದ 60 ಜನರಿಗೆ ಧನ ಸಹಾಯ ವನ್ನು ನೀಡಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮ ದಲ್ಲಿ ಪುಷ್ಪಾಂಡಜ ಸ್ವಾಮೀಜಿ, ಬಿಜೆಪಿ ಹಿರಿಯ ಮುಖಂಡ ಡಿವಿ. ನಾರಾಯಣ ಶರ್ಮ, ಜೋನಾ ಮಲ್ಲಿಕಾರ್ಜುನ, ಬಿವಿ.ನಾರಾಯಣ,ಜೆ ರಾಜೇಂದ್ರ, ನಾಗೇಶ, ಎಂ ಬಿ ನಾಗರಾಜ್, ನಂಜಪ್ಪ, ಬಮೂಲ್ ನಿರ್ದೇಶಕ ಬಿ ಸಿ ಆನಂದ್, ಟಿ ರಂಗರಜ್, ನಗರಸಭೆ ಸದಸ್ಯರಾದ ಬಂತಿ ವೆಂಕಟೇಶ್, ವತ್ಸಲಾ, ಬಿಜೆಪಿ ಮುಖಂಡರಾದ ಎನ್ ಕೆ ರಮೇಶ, ಗುರುಲಿಂಗಯ್ಯ, ರಾಮಾಂಜಿನಪ್ಪ, ಕೆ ಮೋಹನ್ ಕುಮಾರ್, ಆರ್ ಬಸವರಾಜ್, ಶ್ರೀನಿವಾಸ್,  ವತ್ದಲಾ ಇದ್ದರು.

Leave a Reply

Your email address will not be published. Required fields are marked *

Trending

Exit mobile version